WELCOME TO NAMO BRIGADE SHAHABAD OFFICIAL WEBSITE
  • Now get all Scheme Related deatils Online at one place

  • Contact us @9008814254

ಪ್ರಧಾನ್ ಮಂತ್ರಿ ಸುಕನ್ಯಾ ಸಮ್ರಿದ್ಧೀ ಯೋಜನೆ

'ಸುಕನ್ಯಾ ಸಮೃದ್ಧಿ' ಖಾತೆಯ ಸಂಕ್ಷಿಪ್ತ ಮಾಹಿತಿ ತಿಳಿಯಿರಿ


Sukanya Samriddhi Application form download



ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 'ಸುಕನ್ಯಾ ಸಮೃದ್ಧಿ' ಹೆಸರಿನ ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ಒಂದು ಕುಟುಂಬ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಬೇಕು.   powered by Rubicon Project ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ 'ಸುಕನ್ಯಾ ಸಮೃದ್ಧಿ' ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಈ ಖಾತೆ ಆರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ.
ಯಾರು ಖಾತೆ ತೆರೆಯಬಹುದು : ಸರ್ಕಾರಿ ಮತ್ತು ಖಾಸಗಿ ವಾಣಿಜ್ಯೋದ್ಯಮ ಸಂಸ್ಥೆಗಳ ನೌಕರರು, ವ್ಯಾಪಾರ, ಸ್ವಂತ ಉದ್ದಿಮೆ ಸೇರಿದಂತೆ ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.

ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯುವ ಸಂದರ್ಭದಲ್ಲಿ ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ, ವಿಳಾಸ ದೃಢೀಕರಣ ದಾಖಲೆಗಳು ಅಗತ್ಯವಾಗಿವೆ.
ಎಷ್ಟು ಠೇವಣಿ ಇಡಬೇಕು : ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಆರಂಭಿಕ ಠೇವಣಿ 1000 ರೂ.. ಪ್ರತಿವರ್ಷ ಖಾತೆಗೆ ಕನಿಷ್ಠ 1000 ರೂ. ಜಮಾ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ 1000 ರೂ.ನಿಂದ ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ಜಮಾ ಮಾಡಲು ಅವಕಾಶವಿದೆ. ಹೂಡಿಕೆ ಮಾಡಿದ ಮೊತ್ತಕ್ಕೆ ವಾರ್ಷಿಕವಾಗಿ ಬಡ್ಡಿ, ಚಕ್ರಬಡ್ಡಿ ನೀಡಲಾಗುತ್ತದೆ. ಪ್ರಸಕ್ತ ಬಡ್ಡಿ ದರ ಶೇ 9.10.
21 ವರ್ಷ ಖಾತೆ ಇರುತ್ತದೆ : ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಸುಕನ್ಯಾ ಸಮೃದ್ಧಿ ಉಳಿತಾಯ ಖಾತೆಯು ಆರಂಭಗೊಂಡ ದಿನದಿಂದ 21 ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.

ವರ್ಗಾವಣೆಗೆ ಮಾಡಿಸಿಕೊಳ್ಳಬಹುದು : ನೀವು ಖಾತೆ ತೆರೆದ ಊರಿನಿಂದ ಬೇರೆ ಊರಿಗೆ ವರ್ಗಾವಣೆಗೊಂಡರೆ ಖಾತೆಯನ್ನು ಆ ಊರಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಮೀಪದ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದಾಗಿದೆ. ಯೋಜನೆಯ ಎಲ್ಲಾ ಮಾಹಿತಿ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.

                                                                                   ARTICLE BY -- NAMO  TEAM SHAHABAD







Share:

ನರೇಂದ್ರ ಮೋದಿ-ಜಿನ್‌ಪಿಂಗ್‌ ಭೇಟಿ: ಪಾಕಿಸ್ತಾನಕ್ಕೆ ಇರಿಸುಮುರಿಸು

ನರೇಂದ್ರ ಮೋದಿ-ಜಿನ್‌ಪಿಂಗ್‌ ಭೇಟಿ: ಪಾಕಿಸ್ತಾನಕ್ಕೆ ಇರಿಸುಮುರಿಸು

ಏಪ್ರಿಲ್ 28: ಯುದ್ಧಪೀಡಿತ ಆಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಕಾರ್ಯಯೋಜನೆ ನಡೆಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ.
ಭಾರತದ ವಿರುದ್ಧದ ತನ್ನ ವೈರತ್ವಕ್ಕೆ ಚೀನಾ ಗೆಳೆತನದ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಈ ಯೋಜನೆಯಿಂದ ಇರಿಸುಮುರಿಸು ಉಂಟಾಗುವ ಸಾಧ್ಯತೆ ಇದೆ. ಚೀನಾವು ಭಾರತದ ಆಕ್ಷೇಪದ ನಡುವೆಯೇ ಪಾಕಿಸ್ತಾನದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡುತ್ತಿದೆ.
ಚೀನಾಕ್ಕೆ ಅನೌಪಚಾರಿಕ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಎರಡನೆಯ ದಿನವಾದ ಶನಿವಾರ ಜಿನ್‌ಪಿಂಗ್ ಅವರೊಂದಿಗೆ ಸಮಾಲೋಚನೆ ಮುಂದುವರಿಸಿದರು. ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಮೋದಿ ಅವರು ಭಾರತಕ್ಕೆ ಮರಳಿದರು.
ಕ್ಸಿ ಅವರ 'ನವ ಯುಗ' ಮತ್ತು ತಮ್ಮ 'ನವ ಭಾರತ' ಎರಡೂ ಒಂದೇ ರೀತಿಯ ಪರಿಕಲ್ಪನೆಗಳಾಗಿವೆ. ಇವುಗಳಿಂದ ಜಾಗತಿಕ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರ ಪ್ರವಾಸದ ಎರಡನೆಯ ದಿನದ ಮಾಹಿತಿ ಇಲ್ಲಿದೆ

ಸರೋವರದಲ್ಲಿ ವಾಯುವಿಹಾರ

ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ವುಹಾನ್ ನಗರದಲ್ಲಿರುವ ಈಸ್ಟ್ ಲೇಕ್‌ನಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸರೋವರದ ತೀರದಲ್ಲಿ ಸ್ವಲ್ಪ ಹೊತ್ತು ವಾಯುವಿಹಾರ ಮಾಡಿದರು. ಈ ವೇಳೆ ಜಿನ್‌ಪಿಂಗ್ ಅವರು ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ ಶೃಂಗಸಭೆಗೆ ಪ್ರಧಾನಿಯನ್ನು ಆಹ್ವಾನಿಸಿದರು. ಬಳಿಕ ಸರೋವರದಲ್ಲಿ ಬೋಟ್‌ನಲ್ಲಿ ವಿಹಾರ ನಡೆಸಿದರು. ಈ ವೇಳೆ 2019ರಲ್ಲಿ ಭಾರತಕ್ಕೆ ಭೇಟಿ ನೀಡಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿನ್‌ಪಿಂಗ್ ಅವರಿಗೆ ಮೋದಿ ಆಹ್ವಾನ ನೀಡಿದರು.

ಏಷ್ಯಾ ನಿರ್ಮಾಣದ ಸಂಗಾತಿ

ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ನಾವು ಸಕಾರಾತ್ಮಕ ಕೊಡುಗೆಗನ್ನು ನೀಡಬೇಕಿದೆ. ಭವಿಷ್ಯದಲ್ಲಿ ಪದೇ ಪದೇ ಈ ರೀತಿ ನಾವು ಭೇಟಿ ಮಾಡಲಿದ್ದೇವೆ ಎಂದು ನಾನು ನಂಬಿದ್ದೇನೆ. ನಿಮ್ಮೊಂದಿಗೆ ಇನ್ನಷ್ಟು ಗಾಢವಾದ ಸಂವಹನ ಸಂಪರ್ಕ ಹೊಂದಲು ಬಯಸುತ್ತೇನೆ. ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಒಳಗೊಂಡ 21ನೇ ಶತಮಾನದ ಏಷ್ಯಾದ ನಿರ್ಮಾಣಕ್ಕೆ ನಿಮ್ಮ ಸಹಭಾಗಿತ್ವವನ್ನು ಹೊಂದೋಣ ಎಂದು ಜಿನ್‌ಪಿಂಗ್‌ ಹೇಳಿದರು.

ಜಗತ್ತಿನ ಆರ್ಥಿಕತೆಯ ಅರ್ಧಪಾಲು

2000 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಚೀನಾಗಳು ಜಾಗತಿಕ ಆರ್ಥಿಕತೆಯಲ್ಲಿ ಅತ್ಯಂತ ಮಹತ್ವದ ಕೊಡುಗೆ ನೀಡಿವೆ. ವಿಶ್ವ ಆರ್ಥಿಕತೆಯಲ್ಲಿ ಈ ಎರಡು ದೇಶಗಳದ್ದೇ ಶೇ 50 ಪಾಲಿದೆ. ಉಳಿದ ಶೇ 50 ಪಾಲು ಜಗತ್ತಿನ ಉಳಿದ ದೇಶಗಳದ್ದು. 1600 ವರ್ಷಗಳಲ್ಲಿ ಈ ದೇಶಗಳ ಅಪಾರ ಪ್ರಭಾವ ಬೀರಿವೆ. ಜತೆಗೆ ಜಗತ್ತಿನ ಜನಸಂಖ್ಯೆಯ ಶೇ 40ರಷ್ಟು ಪಾಲನ್ನು ಹಂಚಿಕೊಂಡಿದ್ದೇವೆ. ಇದು ಇಬ್ಬರು ನಾಯಕರ ಭೇಟಿ ಮಾತ್ರವಲ್ಲ, ಇತಿಹಾಸ ಮತ್ತು ಸಾಂಸ್ಕೃತಿಕ ಭವ್ಯ ಪರಂಪರೆಯ ಧ್ಯೋತಕ ಎಂದು ಜಿನ್‌ಪಿಂಗ್ ಹೇಳಿದರು.

ಭಯೋತ್ಪಾದನೆಯೇ ದೊಡ್ಡ ಸಮಸ್ಯೆ

ಉಭಯ ದೇಶಗಳ ನಾಯಕರು ಜಾಗತಿಕ ಹವಾಮಾನ ವೈಪರೀತ್ಯ ಮತ್ತು ಅದನ್ನು ಎದುರಿಸಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳಲು ಜಾಗತಿಕ ಪ್ರಯತ್ನದ ಕುರಿತು ಮಾತುಕತೆ ನಡೆಸಿದರು. ಭಯೋತ್ಪಾದನೆ ಬಹುದೊಡ್ಡ ಸವಾಲಾಗಿದೆ. ಅದರ ವಿರುದ್ಧದ ಹೋರಾಟಕ್ಕೆ ಸಹಕಾರವನ್ನು ವೃದ್ಧಿಸಬೇಕಿದೆ ಎಂದು ಚರ್ಚಿಸಲಾಯಿತು.

ಗಡಿ ಸಮಸ್ಯೆಗೆ ಪರಿಹಾರ

ಭಾರತ ಮತ್ತು ಚೀನಾ ನಡುವಣ ಗಡಿ ವಿವಾದದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ನ್ಯಾಯೋಚಿತ ಮತ್ತು ಪರಸ್ಪರ ಸಹಮತದ ಪರಿಹಾರ ಕಂಡುಕೊಳ್ಳಲು ವಿಶೇಷ ಪ್ರಾತಿನಿಧ್ಯದ ಅಗತ್ಯವನ್ನು ಮನಗಾಣಲಾಯಿತು. ಚೀನಾ-ಭಾರತ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವ ಅಗತ್ಯದ ಕುರಿತು ಸಮಾಲೋಚಿಸಿದ ನಾಯಕರು, ಎರಡೂ ದೇಶಗಳ ಸೇನಾಪಡೆಯ ನಡುವೆ ಸಂವಹನ ಬಲಪಡಿಸುವ ಮತ್ತು ವಿಶ್ವಾಸ ಬೆಳೆಸುವ ಮಾರ್ಗಸೂಚಿಗಳನ್ನು ತಯಾರಿಸಲು ನಿರ್ಧರಿಸಲಾಯಿತು.

ಸಿನಿಮಾ ಮಾಡಲು ಬನ್ನಿ

ಮನರಂಜನಾ ಕ್ಷೇತ್ರದಲ್ಲಿಯೂ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ಯೋಜನೆಯ ಕುರಿತು ಪ್ರಸ್ತಾಪಿಸಲಾಯಿತು. ನಾಣು ಭಾರತದ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಈ ಸಿನಿಮಾ ಕ್ಷೇತ್ರವನ್ನು ವಿಸ್ತರಿಸುವುದು ಅತ್ಯುತ್ತಮ ಯೋಜನೆ. ಭಾರತದ ಇನ್ನಷ್ಟು ಸಿನಿಮಾಗಳು ಚೀನಾಕ್ಕೆ ಬರಬೇಕು, ಅದೇ ರೀತಿ ಚೀನಾದ ಸಿನಿಮಾಗಳು ಹೆಚ್ಚು ಹೆಚ್ಚು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬೇಕು ಎಂದು ಜಿನ್‌ಪಿಂಗ್ ಹೇಳಿದರು.

ಚೀನಾ ಪತ್ರಿಕೆಗಳಲ್ಲಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಚೀನಾದ ಅನೇಕ ಪತ್ರಿಕೆಗಳು ಮಹತ್ವ ನೀಡಿವೆ. ಭವಿಷ್ಯದಲ್ಲಿ ಉತ್ತಮ ಸಹಕಾರದ ಭರವಸೆಯನ್ನು ಈ ಭೇಟಿ ಮೂಡಿಸಿದೆ ಎಂದು ಕೆಲವು ಪತ್ರಿಕೆಗಳು ಶ್ಲಾಘಿಸಿವೆ. ಚೀನಾ ಡೈಲಿ ಡಾಟ್ ಕಾಂ ಪತ್ರಿಕೆಯ ಸಂಪಾದಕೀಯವು ಅನೌಪಚಾರಿಕ ಶೃಂಗಸಭೆಯನ್ನು ನಿರೀಕ್ಷೆಗಳಷ್ಟೇ, ಫಲವಿಲ್ಲ ಎಂದು ಟೀಕಿಸಿದೆ.

Share:

ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಜನರನ್ನು ಸೆಳೆಯಲು ಬಿಜೆಪಿಯ ಪ್ರಮುಖ ಅಸ್ತ್ರವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಪ್ರಚಾರದ ಅಖಾಡಕ್ಕೆ ಪೂರ್ಣವಾಗಿ ಇಳಿದಿಲ್ಲ. ಆದರೆ, ದೂರದ ದೆಹಲಿಯಲ್ಲಿಯೇ ಕುಳಿತು ಇಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.


ಗುರುವಾರ ನಮೋ ಆಪ್ ಮೂಲಕ ರಾಜ್ಯದ ಬಿಜೆಪಿ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಮೋದಿ ಅವರು, ಅಭಿವೃದ್ಧಿ ಮಂತ್ರ ಚುನಾವಣಾ ಪ್ರಚಾರದ ಮೂಲ ಧ್ಯೇಯವಾಗಿರಬೇಕು ಎಂದು ಹೇಳಿದರು.
'ಅಭಿವೃದ್ಧಿ, ತ್ವರಿತ ಅಭಿವೃದ್ಧಿ ಮತ್ತು ಸಮಗ್ರ ಅಭಿವೃದ್ಧಿ'- ಇವು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಪಕ್ಷದ ಮೂರು ಅಂಶಗಳ ಕಾರ್ಯಸೂಚಿ.
ದೇಶದ ರಾಜಕೀಯವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಅದಕ್ಕೆ ತನ್ನ ಕೆಲಸಗಳ ಕುರಿತು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ವಲಯ, ನವೀಕರಿಸಬಹುದಾದ ಇಂಧನ, ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಎಲ್‌ಪಿಜಿ ಸಂಪರ್ಕ ಪೂರೈಕೆ ಮುಂತಾದವುಗಳಲ್ಲಿನ ಪ್ರಗತಿ ಹೋಲಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರಕ್ಕಿಂತ ಎಲ್ಲ ವಿಚಾರಗಳಲ್ಲಿಯೂ ಸಾಕಷ್ಟು ಮುಂದಿದೆ. ಕೃಷಿ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಗಳ ಬಗ್ಗೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಯಾವುದೇ ಗಮನ ಹರಿಸಿಲ್ಲ ಎಂದು ದೂರಿದರು.

ಸಮಾಜದ ಬಡ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಕುರಿತು ಅವರು ಪ್ರಸ್ತಾಪಿಸಿದರು. ಬಡವರ ಕೈಗಳನ್ನು ನಾವು ಬಲಪಡಿಸಿದಾಗ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಅವರ ಉನ್ನತಿಗಾಗಿ ಎನ್‌ಡಿಎ ಸರ್ಕಾರ ಬದ್ಧವಾಗಿದೆ.
ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಅವರು ಕೇವಲ ವಂಶಪಾರಂಪರ್ಯ ರಾಜಕೀಯ, ಸುಳ್ಳುಗಳನ್ನು ಹರಡುವುದು ಮತ್ತು ಜಾತಿ ಆಧಾರದಲ್ಲಿ ಜನರನ್ನು ವಿಭಜಿಸುವುದನ್ನು ಮಾತ್ರ ಮಾಡುತ್ತಿದ್ದಾರೆ. ಇದೇ ವೇಳೆ ಬಿಜೆಪಿ 'ಒಂದೇ ಭಾರತ, ಶ್ರೇಷ್ಠ ಭಾರತ' ಮತ್ತು 'ಸಬ್‌ ಕಾ ಸಾಥ್‌, ಸಬ್ ಕಾ ವಿಕಾಸ್' ಎಂಬ ಮಂತ್ರಗಳನ್ನು ನಂಬಿಕೊಂಡಿದೆ ಎಂದು ತಿಳಿಸಿದರು.


ಕರ್ನಾಟಕದಲ್ಲಿ ತಾನು ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಾನು ಗೆಲ್ಲುವುದಿಲ್ಲ ಎಂಬುದನ್ನು ಅರಿತುಕೊಂಡಿರುವ ಕಾಂಗ್ರೆಸ್, ಈ ಮೂಲಕ ಅತಂತ್ರ ವಿಧಾನಸಭೆಯ ಸೃಷ್ಟಿಗಾಗಿ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯದ ಬಗ್ಗೆ ಕರ್ನಾಟಕದ ಜನರಿಗೆ ತಿಳಿದಿದೆ. ಅವರನ್ನು ಆ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.

ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಅವರು ಸೂಚಿಸಿದರು. ಬಳಿಕ, ಪಕ್ಷದ ಶಕ್ತಿಯನ್ನು ವೃದ್ಧಿಸುವ, ರೈತರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

Share:

Recent Posts

For Advertisement contact 9008814254